Saturday, November 12, 2011

ಎಲ್ಲಿಗೆ ಪಯಣ !!!

ವಿಸ್ಮಯ ಪ್ರಪಂಚದಲ್ಲಿ ಏನೆಲ್ಲಾ ಬದಲಾವಣೆಯಾಗಿದೆ ..........
ಹರಟೆ ಹೊಡೆಯಲು ಇದ್ದ ಅರಳಿ ಕಟ್ಟೆಗಳು ಮಾಯವಾಗಿ ಮಾಯನಗರಿಯಲ್ಲಿ 
ಮಾಲ್ ಎಂಬ ನಿತ್ಯಸಂತೆಗೆ ಎಡೆ ಮಾಡಿಕೊಟ್ಟಿದೆ. ಮನೆ ಮುಂದೆ ತಂಗಾಳಿ 
ಸವಿಯುತ್ತ ಕುಳಿತ ಹರಟೆ ಹೊಡೆಯುತ್ತಿದ್ದ ದಿನಗಳು ಈಗ ಕೇವಲ ನೆನಪಾಗಿ ಉಳಿದಿವೆ.

ಹಬ್ಬಕ್ಕೊಮ್ಮೆಯೋ ಅಥವಾ ಸಿನಿಮಾ ನೆಪದಲ್ಲಿ ಎಂದೋ ಒಮ್ಮೆ ಹೋಟೆಲ್ ನೋಡುತ್ತಿದ್ದ 
ದಿನಗಳು, ಎಷ್ಟು ಚೆನ್ನಾಗಿರ್ತಿತ್ತು, ಖಾಲಿ ದೋಸೆ ಚಟ್ನಿ, ಮಸಾಲ ದೋಸೆ, ಮತ್ತು ಕಾಫಿಗೆ 
ಮಾತ್ರ ಹೋಟೆಲ್ ತಿಂಡಿ ಸೀಮಿತವಾಗಿದ್ದ ದಿನಗಳು ಅವು, ಇಡ್ಲಿ, ಉಪ್ಪಿಟ್ಟು ದುಡ್ಡು ಕೊಟ್ಟು 
ತಿನುತ್ತಿದವ್ರು ತುಂಬಾನೇ ಕಡಿಮೆ ಜನ. 

ನನಗೆ ನೆನಪಿರುವಂತೆ ಆ ದಿನಗಳಲ್ಲಿ ಸೀಮೆ ಎಣ್ಣೆ, ಮತ್ತು ಸಿನಿಮಾ ಟಿಕೆಟ್ಗೆ ಮಾತ್ರ ಜನ 
ಸಾಲಾಗಿ ನಿಲ್ಲುತ್ತಿದ್ದರು, ಆದರೆ ಇವತ್ತು ಜನ ಸಾಲಾಗಿ ನಿಲ್ಲೋದು ಕಾಫಿ ಕುಡ್ಯಕ್ಕೆ, ಬಿಲ್ 
ಕಟ್ಟಕ್ಕೆ, ದುಡ್ಡು ತೊಗೊಳಕ್ಕೆ, ಮತ್ತು ಸಾಮನ್ ತೊಗೊಂಡ್ರೆ ಹಣ ಪಾವತಿಸೋದಕ್ಕೆ.
ಸೀಮೆ ಎಣ್ಣೆ ಮತ್ತು ಸಿನಿಮಾ ಎರೆಡು ಅಸ್ತಿತ್ವವನ್ನೇ ಕಳೆದುಕೊಂಡಿರುವುದು ಶೋಚನೀಯ.


ಅರಳಿ ಮರದ ಗಾಳಿ ಹೋಗಿ ಹವಾ ನಿಯಂತ್ರಿತ ಕಟ್ಟಡಗಳು ಬಂದರು ಆ ಹಿತವನ್ನು 
ಕೊಡಲಿಲ್ಲ, ಅತ್ಯಾಧುನಿಕ ಹೋಟೆಲ್ ಬಂದರು ಆ ಚಟ್ನಿ ಸಾಂಬಾರ್ ರುಚಿ ಮತ್ತೆ ಸಿಗಲೇ ಇಲ್ಲ.
ಇಂದು ಶಾಲಾ ಕಾಲೇಜುಗಳಲ್ಲಿ ಮಕ್ಕಳನ್ನು ಭರ್ತಿಮಾಡಲು ಹೊಡೆದಾಡಿದಷ್ಟು ಅವತ್ತು ಸೀಮೆ 
ಎಣ್ಣೆಗು ಹೊಡೆದಾಡುತ್ತಿರಲಿಲ್ಲ....

ನಾ ನಡೆದು ಬಂದ ಹಾದಿಯನ್ನೊಮ್ಮೆ ಹಿಂದುರಿಗಿ ನೋಡಿದಾಗ ....
ಎಲ್ಲಿಗೆ ಪಯಣ !
ಯಾವುದೋ ದಾರಿ ?
ಏಕಾಂಗಿ ಸಂಚಾರಿ........
ಎನ್ನುವ ಸಾಲುಗಳು ಡಾ l ಪಿ. ಬಿ. ಶ್ರೀನಿವಾಸ್ ಅವರ ಧ್ವನಿಯಲ್ಲಿ ನನ್ನ ಪ್ರಶ್ನಿಸಿದಂತೆ ಭಾಸವಾಗುತ್ತದೆ.

Sunday, November 6, 2011

ಬಂಧ

ಆಗಸದಿಂದ ಭುವಿ ಚಂದ,
ಭುವಿಯಿಂದ ಆಗಸ ಅಂದ, 
ಏನಿದರ ಋಣಾನುಬಂಧ !!
ಮೇಲು ಕೀಳನು ಮರೆತ ಸಂಬಂಧ, 
ನಾವೇಕೆ ಮರೆತೆವು ಈ ಅನುಬಂಧ  ???

Saturday, October 22, 2011

prakruthi prasad: ಸೃಷ್ಟಿ

prakruthi prasad: ಸೃಷ್ಟಿ: ಸೃಷ್ಟಿಯ ಚಮತ್ಕಾರವೇ ವಿಸ್ಮಯ !!! ಯುಗ ಯುಗಗಳಿಂದ ಬದಲಾಗದ ಭುವಿ - ಬಾನಿನ ಅಂತರ, ಸೂರ್ಯ - ಚಂದ್ರರ ಕಣ್ಣಾ ಮುಚ್ಚಾಲೆ, ತಾರೆಗಳ ಹೊಳಪು, ಮೋಡಗಳ ವೈವಿದ್ಯಮಯ ಚಿತ್ತಾರ...

ಸೃಷ್ಟಿ


ಸೃಷ್ಟಿಯ ಚಮತ್ಕಾರವೇ ವಿಸ್ಮಯ !!!

ಯುಗ ಯುಗಗಳಿಂದ ಬದಲಾಗದ ಭುವಿ - ಬಾನಿನ ಅಂತರ,

ಸೂರ್ಯ - ಚಂದ್ರರ ಕಣ್ಣಾ ಮುಚ್ಚಾಲೆ, ತಾರೆಗಳ ಹೊಳಪು,

ಮೋಡಗಳ ವೈವಿದ್ಯಮಯ ಚಿತ್ತಾರ, ಬಾನಂಗಳದಲ್ಲಿ ಹಿಂಡು ಹಿಂಡಾಗಿ 

 ಚೆಲ್ಲಾಟವಾಡುವ ಪಕ್ಷಿಗಳ ಕಲರವ, ಪ್ರಾಣಿಗಳ ಆಹಾರ, ವಿಹಾರ, 

ಹಾವಿನ ಚಲನ, ನವಿಲಿನ ನರ್ತನ, ಚಿಮ್ಮುವ ಜಿಂಕೆಗಳು, ಹೊಸಕುವ ಭೀತಿ 

ಇದ್ದರು ಭುವಿಯ ಮೇಲೆ ಬಿಂಕದಿ ನಡೆಯುತ್ತಾ ಆಹಾರ ಹುಡುಕಿಕೊಳ್ಳುವ 

ಹುಳು ಹುಪ್ಪಟೆಗಳ ಎಂದು ಕಡಿಮೆಯಾಗದ ಚೇತನ, ಸಾಲು ಸಾಲಾಗಿ  

ಮೂಟೆ ಹೊರುವ ಇರುವೆಗಳು, ರಂಗು ಬದಲಿಸದ ಚಿಟ್ಟೆಗಳು, ಬಣ್ಣ ಬದಲಾದರು 

ಫಸಲು ಕೊಡುವ ಮಣ್ಣು, ಕಾಣದಿದ್ದರೂ ಸಕಲ ಜೀವರಾಶಿಗಳನ್ನು ಬದುಕಿಸುವ ಗಾಳಿ,

ಭೀತಿಯಿಲ್ಲದೆ ಕಾಡು - ಮೇಡುಗಳಲ್ಲಿ ಹರಿವ ನೀರು ದಾಹ ತೀರಿಸುವ ಪರಿ. ಅವಶ್ಯಕತೆ 

ಹೆಚ್ಚಾದರು ಸಿಹಿ ಕಡಿಮೆಯಾಗದ ಹಣ್ಣು, ಬಿಸಿಲೋ, ಚಳಿಯೋ, ಮಳೆಯೋ ಅಚ್ಚಳಿಯದೆ 

ಹಸಿರಾಗೇ ಉಳಿದಿರುವ ನೇಸರ. 

ಭುವಿಯ ಉದ್ದಗಲಕ್ಕೂ ಅರಮನೆಯಿಂದ ಗುಡಿಸಲವರೆಗೂ ಎಲ್ಲರನ್ನು ಕಾಪಾಡುವುದು ಸೂರು, 

ಆಹಾರ, ನೀರು, ಇಂತಹ ವಿಸ್ಮಯ ಸೃಷ್ಟಿಗೆ ಸೀಮಾರೇಖೆಯ ಮಾನವ !!!

ಸೃಷ್ಟಿಯ ನಿಯಮದಂತೆ ಹುಟ್ಟುವ ಮಾನವ ಮನುಷ್ಯನಾಗಿ ಉಳಿಯದೆ, ಜಾತಿ, ಮತ,

ಪಂಗಡ, ಭಾಷೆ, ಪದ್ಧತಿ ಎಂಬ ಅಂಕುಶಗಳಿಗೆ ಸೀಮಿತವಾಗುತ್ತ ಸಾಗುತ್ತಾನೆ, ದ್ವೇಷ,

ಅಸೂಯೆ, ಭಲ ಪ್ರದರ್ಶನಕ್ಕೆ ಭುವಿಯನ್ನು ವಿಂಗಡಿಸುತ್ತಾ ಸಾಗುತ್ತಾನೆ. ಭುವಿಗೆ 

ಬೇಲಿ ಹಾಕುವ ದುಸ್ಸಾಹಸದಲ್ಲಿ ಮನುಷ್ಯನಾಗಿ ಬದುಕುವುದನ್ನೇ ಮರೆತಿದ್ದಾನೆ.


ಹುಟ್ಟಿದಕ್ಕೆ ಸುಂಕ, ಕಲಿಯಲು ಸುಂಕ, ಆಹಾರಕ್ಕೆ ಸುಂಕ, ಬದುಕಲು ಸುಂಕ, ವರಿಸಲು ಸುಂಕ, 

ಚಲಿಸಲು ಸುಂಕ,ತಾ ಸೃಷ್ಟಿಸಿಕೊಂಡಿರುವ ನಿಯಮಿತ ನರಕದ ಅಸುಖವನ್ನು ಆಸ್ವಾದಿಸಲು 

ದಂಡ ಕಟ್ಟಲೇಬೇಕು. ಏಕೆಂದರೆ ಸೃಷ್ಟಿಯೆಂಬ ಸ್ವರ್ಗದಲ್ಲಿ, ಸುಖವನ್ನು ಸುಂಕವಿಲ್ಲದೆ ಹಂಚ್ಚುವರು ...

ಪ್ರಕೃತಿ 

Friday, October 21, 2011

ಬಣ್ಣ !


ಚಿಮ್ಮುವ ಬಣ್ಣಗಳ ಹುರುಪಿಗೆ 
ಪರದೆಯ ಅಂಗಳವೆ ಸಾಕ್ಷಿ  !!!
ವಿವಿಧ ಆಕಾರ ಪ್ರಕಾರಗಳಿಗೂ 
ಜೀವಂತ ಕಳೆ ಕೊಡುವುದೀ ಬಣ್ಣ !!! 
ಶೃಂಗಾರದ ಎಳೆಯೋ, 
ನೇಪತ್ಯದ ತಿರುವೋ,
ಬಗೆ ಬಗೆಯ ಭಾವನೆಗಳ 
ಹುಟ್ಟುಹಾಕುವುದೀ ಬಣ್ಣ !!!
ಬದುಕಿನ ಪೂರ್ಣವಿರಾಮವನ್ನು 
ಚುಕ್ಕಿಯಾಗಿಸಿ ನಕ್ಕಿಯಂತೆ  
ಹೊಳಪು ನೀಡುವುದೀ ಬಣ್ಣ !!!  

ಪ್ರಕೃತಿ